ಮೌನ ಮುರಿಯಲಿ

ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬಾಳ್ವೆಗೆ ಒತ್ತು ನೀಡುತ್ತಾ ಆದಷ್ಟೂ ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಾಳ್ಮೆ ತೋರುತ್ತಿರುವುದು ಹೇಡಿತನದ ಲಕ್ಷಣವಲ್ಲ ಎಂಬುದನ್ನು ಮುಸ್ಲಿಂ ಬಾಂಧವರು ಅರಿಯುವ ಕಾಲವೀಗ ಬಂದಿದೆ. ಹಿಂದೂಗಳಲ್ಲಿ ತಾವು ಮಂದಿರ ಕಟ್ಟುವುದು ಬೇಡವೆಂದು ವಾದಮಾಡುವ ಬುದ್ಧಿಜೀವಿಳಿದ್ದಾರೆ, ಬರಹಗಾರರಿದ್ದಾರೆ, ಮೇಲಾಗಿ ಅನೇಕ ಮಠಾಧೀಶರು ಸಹ ರಾಮನ ಮಂದಿರ ನಿರ್ಮಾಣದಿಂದ ಸಮಾಜದ ಶಾಂತಿ ಕದಡುವುದಾದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗೋಣವೆಂದು ಹೇಳುತ್ತಿರುವುದಷ್ಟೇ ಅಲ್ಲ ಸರ್ಕಾರದ ಮೇಲೂ ಒತ್ತಡ ಹೇರುತ್ತಿದ್ದಾರೆ. ಹಿಂದೂಗಳ ಮೇಲೆ ಹಿಂಸೆ ದೌರ್ಜನ್ಯಗಳು ನಡೆದಾಗ ಶಾಂತಿ ಸಹನೆಯಿಂದ ವರ್ತಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೆ ಮೌನವಹಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಇದರ ಅರ್ಥ ಇವರೆಲ್ಲ ಮುಸ್ಲಿಮರನ್ನು ಓಲೈಸುತ್ತಾರೆಂದಲ್ಲ. ದೇಶದಲ್ಲಿ ಪ್ರಕ್ಷುಬ್ದ ಮಾತಾವರಣ ಉಂಟಾಗಿ ಅಮಾಯಕರ ಕಗ್ಗೊಲೆಗಳು, ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟಾಗದಿರಲೆಂಬ ವಿವೇಚನೆಯೇ ಮೌನಕ್ಕೆ ಕಾರಣವಾಗಿದೆಯಷ್ಟೆ.

ನಮ್ಮಲ್ಲಿ ದೇವರೇ ಇಲ್ಲವೆಂದು ವಾದಿಸುವವರು, ದೇವಸ್ಥಾನ, ಮಠ, ಮಂದಿರಗಳಿಗೆ ಹೋಗದ ಲಕ್ಷಾಂತರ ಜನರಿದ್ದಾರೆ. ಬಸವಣ್ಣ, ಬುದ್ದರಂತಹ ವಿವೇಕಿಗಳು ದೇವಸ್ಥಾನ ಮಠ ಮಂದಿರಗಳನ್ನು ಟೀಕಿಸಿದ್ದಾರೆ. ದೇವರು ಹೊರಗೆಲ್ಲೂ ಇಲ್ಲಾ ನಮ್ಮೊಳಗೆಯೇ ಇದ್ದಾನೆಂದು ಸಾರಿದ್ದಾರೆ. ಸಹಸ್ರಾರು ಜಾತಿಗಳಿದ್ದರೂ ಹಿಂದೂಗಳು ಮೊದಲು ತಾವು ಭಾರತೀಯರು ಎಂಬುದನ್ನು ಮರೆತವರಲ್ಲ, ಧರ್ಮದ ಹೆಸರಿನಲ್ಲಿ ದೇಶವನಾಳುವ, ದೇಶಕ್ಕೆ ಕಿಚ್ಚು ಹಚ್ಚುವ ಜನರನ್ನು ಹೀನಾಯವಾಗಿ ಕಂಡು ಅಂತಹವರಿಗೆ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಕಲಿಸುತಾರೆಂಬುದಕ್ಕೆ ಮೊನ್ನೆ ನಡೆದ ಚುನಾವಣೆಗಳೇ ಸಾಕ್ಷಿ. ನಮ್ಮಲ್ಲಿ ಮುಸ್ಲಿಮರನ್ನು, ಕ್ರೈಸ್ತರನ್ನೂ ಮೊದಲಿನಿಂದಲೂ ಸೋದರ ಭಾವದಿಂದ ಅನುಕಂಪದಿಂದ ನೋಡಲಾಗುತ್ತಿದೆ. ಇವರೆಲ್ಲಾ ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದವರಲ್ಲವೆ ಎಂದವರ ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸುವ ಸಹೃದಯಿಗಳಿದ್ದಾರೆ.

ಇಂತಹದ್ದೇ ಮನೋಭಾವ, ಪ್ರೀತಾದರ, ಸಹೋದರ ಭಾವ, ತ್ಯಾಗಶೀಲತೆ, ಪರಿಶುದ್ಧ ಆಲೋಚನೆ ಸೆಕ್ಯುಲರ್ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೂ ಅನ್ವಯಿಸುತ್ತದಲ್ಲವೆ. ಕಾಶ್ಮೀರದಲ್ಲಿ ದಿನನಿತ್ಯ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಮುಸ್ಲಿಂ ಭಯೋತ್ಪಾದಕರಿಂದ ವಿಧ್ವಂಸಕ ಕೃತ್ಯಗಳು ಸಂಭವಿಸಲಿ, ಹಿಂದೂಗಳ ಸಹಸ್ರ ಸಹಸ್ರ ಹೆಣಗಳು ಬೀಳಲಿ, ಮನೆ ಮಠಗಳು ಮಣ್ಣುಗೂಡಲಿ, ಒಂದಿನಿತೂ ಬಾಯಿ ಬಿಡದ, ಪ್ರತಿಭಟಿಸುವ ಮಾನವೀಯತೆ ತೋರದ ಸೆಕ್ಯುಲರ್ ಹಿಂದೂ ವಾದಿಗಳಂತೆಯೇ ಮುಸ್ಲಿಮರೂ ವರ್ತಿಸುತ್ತಿರುವುದರಿಂದಲೇ ಈವತ್ತು ವಿ.ಹೆಚ್.ಪಿ.ಗಳು, ಭಜರಂಗ ದಳದಂತಹ ಉಗ್ರರು ಹೆಚ್ಚಿಕೊಳ್ಳಲು, ಜನತೆಯ ಅನುಕಂಪ, ಬೆಂಬಲ ವೃದ್ಧಿಸಿಕೊಳ್ಳಲು ಕಾರಣವಾಗಿದೆ. ಇದು ಅಪಾಯದ ಸೂಚನೆ.

ಮುಸ್ಲಿಮರಲ್ಲೂ ಮಹತ್ವದ ರಾಜಕಾರಣಿಗಳಿದ್ದಾರೆ. ದೇಶಭಕ್ತರು, ರಾಷ್ಟ್ರಮಟ್ಟದ ಕವಿ ಕಲಾವಿದರು, ಧರ್ಮಾಧಿಕಾರಿಗಳಾದ ಇಮಾಮರು, ಮೌಲ್ವಿಗಳು, ಮುಲ್ಲಾಗಳು, ಖಾಜಿಗಳು ಇದ್ದಾರೆ. ಆದರೇನು ಮುಸಲ್ಮಾನರ ಮೇಲೆ ಹಿಂಸೆಗಳಾದಾಗ ಮಾತ್ರವೇ ಬಯಲಿಗಿಳಿದು ಸುದ್ದಿ ಮಾಧ್ಯಮಗಳಲ್ಲಿ ಪೋಜ್ ಕೊಡುತ್ತಾರೆ. ‘ದೇಶದ ತುಂಬಾ ಮಸೀದಿಗಳಿವೆ. ಅನೇಕ ಮಸೀದಿಗಳು ಹಾಳಾಗಿ ಬಿದ್ದಿವೆ. ಅವೇ ಸಾಕು. ಅಯೋಧ್ಯೆಯಲ್ಲಿನ ಮಸೀದಿ ನಮಗೆ ಬೇಡ. ಅಲ್ಲಿ ಮಂದಿರ ನಿರ್ಮಾಣವೂ ಬೇಡ. ಧರ್ಮಾಸ್ಪತ್ರೆ, ವಿದ್ಯಾಶಾಲೆಗಳ ನಿರ್ಮಾಣವಾಗಲಿ ಎಂದು ಯಾರಾದರೊಬ್ಬರು ಪ್ರಾಂಜಲ ಮನಸ್ಸಿನಿಂದ ಹೇಳುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜನಾದರಣೆಗಳಿಸುವ ಯತ್ನ ಮಾಡಿದಾಗಲಿ ಈವರೆಗೆ ಕಾಣಲಿಲ್ಲ! ಇಂತಹ ಮಾತುಗಳು ಮುಸ್ಲಿಮರಿಂದ ಬರಲಿ, ಗಲಭೆ, ಗದ್ದಲ, ಸಾವು ನೋವುಗಳು ತಾವಾಗಿ ಬೇಸತ್ತು ಹೋಗುತ್ತವೆ. ಶಬನಾ ಅಜ್ಮಿ, ದಿಲೀಪ್‌ಕುಮಾರ್‌ರಂತಹ ಬುದ್ಧಿಮಾನ್‌ಗಳು ದಿಲ್ಲಿ ಇಮಾಮ್‌ಗಳು ವಿವೇಚಿಸಿ ಇ೦ತಹ ತೀರ್ಮಾನಕ್ಕೆ ಬರಬಾರದೇಕೆ? ಆಗ ಮಂದಿರ ಕಟ್ಟಲೇಬೇಕೆಂಬ ಹಠವಾದಿ ಹಿಂದೂಗಳೂ ಅಲ್ಪಸಂಖ್ಯಾತರಾಗಿಬಿಡುತ್ತಾರೆ. ಅವರು ಯಾವುದೇ ಪಕ್ಷ, ಪಂಗಡ, ಜಾತಿ, ಮಠಾಧಿಪತಿಗಳಾಗಿರಲಿ ಅಂತಹ ಸಿನಿಕರನ್ನು ನಿಜವಾದ ಹಿಂದುಗಳು ಬೆಂಬಲಿಸುವಂತಹ ಮತಾಂಧರಲ್ಲ. ದಯೆಯೇ ಧರ್ಮದ ಮೂಲವಯ್ಯಾ, ಅಹಿಂಸಾ ಪರಮೋ ಧರ್ಮ ಎಂದು ನಂಬಿದ ಪುಣ್ಯ ಜೀವಿಗಳು ಹುಟ್ಟಿದ ನೆಲ ಇದು. ಇಂತಹ ತತ್ವವನ್ನು ನಂಬಿದ ಜಾತ್ಯಾತೀತ ಜಾಣರೂ ನಮ್ಮಲ್ಲಿ ಬಹು ಸಂಖ್ಯಾತರಿದ್ದಾರೆ.

ಇದೀಗ ಮುಸಲ್ಮಾನ್ ಬುದ್ಧಿಜೀವಿಗಳು, ಲೇಖಕರು, ಕವಿಗಳು ಮೌನ ಮುರಿಯುವ ಔದಾರ್ಯ ತೋರಬೇಕಿದೆ. ತ್ಯಾಗಕ್ಕೆ ಸಿದ್ದರಾಗಬೇಕಿದೆ. ನಾವೆಲ್ಲ ಒಂದೇ ಎಂಬ ನಂಬಿಕೆ ಉಂಟು ಮಾಡಬೇಕಿದೆ. ಮೌನ ಎಲ್ಲಾ ಕಾಲಕ್ಕೂ ಬಂಗಾರವಾಗದಲ್ಲವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡ-ಹೆಂಡತಿ
Next post ಉದ್ಧಾರ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys